Sunday, January 30, 2022

ಚಿಗುರು ಪುಸ್ತಕಗಳ ವಿತರಣೆ

 





ದಿನಾಂಕ 31/01/2022 ರಂದು ಜ್ಞಾನ ಜ್ಯೋತಿ ಕಾರ್ಯಕ್ರಮದ ಅಡಿಯಲ್ಲಿ ಕಲಿಕಾ ಮಿತ್ರಾರಾದ ಶ್ರೀ ಬಸಪ್ಪ ವಾಲಿಕಾರ ಇವರು  ಸರ್ಕಾರಿ ಪ್ರೌಢಶಾಲೆ ಜಹಗೀರಗುಡದೂರಗೆ ಭೇಟಿ ನೀಡಿ ಚಿಗುರು ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದರು. ಮಕ್ಕಳ ಕಲಿಕೆಗೆ ಪೂರಕವಾದ ಚಿಗುರು ಪುಸ್ತಕದಲ್ಲಿಯ ಚಟುವಟಿಕೆಗಳ ಹಾಳೆಗಳನ್ನು  ಶಿಕ್ಷಕರು ಮಕ್ಕಳಿಗೆ  ರೂಡಿಮಾಡಿಸಲು ತಿಳಿಸಿದರು.  ಶಿಕ್ಷಕರೊಂದಿಗೆ ಸಮಾಲೋಚಸಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ವಿಜ್ಞಾನ ವಿಷಯದ ಕುರಿತು ಸಂವಾದ ನಡೆಸಿದರು. ವಿದ್ಯಾರ್ಥಿಗಳು ಪ್ರತಿ ವಿಷಯಗಳನ್ನು ಸರಳವಾಗಿ ಅರ್ಥ ಮಾಡಿಕೊಳ್ಳವುದರ ಜೊತೆಗೆ ವಿಷಯದ ಕುರಿತು  ಪ್ರಾವೀಣ್ಯತೆ ಹೊಂದುವುದರ ಜೊತೆಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ತಾಲೂಕು ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಕಲಿಕಾ ಮಿತ್ರರಾದ ಶ್ರೀ ಬಸಪ್ಪ ವಾಲಿಕಾರ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಶಿವಪ್ಪ ಇಲಾಳ, ಶ್ರೀ ಜಗದೀಶ ಬಾಸಿಂಗದ, ಶ್ರೀ ಬಸಪ್ಪ ಹಿರೇಮನಿ, ಶ್ರೀ ಶರಣಪ್ಪ ರಾಂಪೂರ, ಶ್ರೀ ರಮೇಶ ಚೌವ್ಹಣ, ಶ್ರೀಮತಿ ತನುಜಾ ಪೋಲಿಸ್, ಶ್ರೀಮತಿ ಸುಮಿತ್ರ, ಕುಮಾರಿ ಈರಮ್ಮ ಕೃಷ್ಟಪ್ಪನವರ, ಶ್ರೀ ಹುಲ್ಲಪ್ಪ ಮುಡಿಯಪ್ಪನವರ ಹಾಗೂ ರಂಗ ಶಿಕ್ಷಕರಾದ ಶ್ರೀ ಗುರುರಾಜ ಅವರು ಉಪಸ್ಥಿತರಿದ್ದರು.