Monday, February 22, 2021

ಎಸ್ ಡಿ ಎಂ ಸಿ ಸದಸ್ಯರ ತರಬೇತಿ ಕಾರ್ಯಗಾರ

ಎಸ್ ಡಿ ಎಂ ಸಿ ಸದಸ್ಯರ ತರಬೇತಿ

ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯವತಿಯಿಂದ ಇಂದು ಸರಕಾರಿ ಪ್ರೌಢಶಾಲೆ, ಜಹಗೀರಗುಡದೂರ ನಲ್ಲಿ ಎಸ್.ಡಿ.ಎಮ್.ಸಿ ಸದಸ್ಯರ ತರಬೇತಿ ಕಾರ್ಯಕ್ರಮವನ್ನು ದಿನಾಂಕ ೨೨.೦೨.೨೦೨೧ ರಂದು ನಡೆಸಲಾಯಿತು.

ಪ್ರಾಸ್ತಾವಿಕ ಮಾತನಾಡಿದ ಸಿ ಆರ್ ಪಿ ಯವರಾದ ಶ್ರೀ ಭರಮಪ್ಪ ಪರಸಾಪೂರನವರು ಇಂದು ಈ ತರಬೇತಿಯಲ್ಲಿ ಶೇಕಡಾ ೯೦% ಸದಸ್ಯರು ಹಾಜರಾಗಿದಕ್ಕೆ ಸಂತೋಷವಾಗುತ್ತದೆ. ಎಸ್ ಡಿ ಎಂ ಸಿ ಸದಸ್ಯರು ಶಾಲೆಯ ಅಭಿವೃದ್ಧಿಯ ಕಡೇ ಗಮನ ನೀಡುತ್ತಿರವುದರಿಂದ ಶಾಲೆಗಳು ಎಲ್ಲ ಹಂತ

ಗಳಲ್ಲಿ ಉತ್ತಮವಾಗಿ ಫಲಿತಾಂಶ ನೀಡುತ್ತಿವೆ. ಗ್ರಾಮ ಪಂಚಾಯಿತಿ ಅನುದಾನದಲ್ಲಿ  ಶೇಕಡಾ ೩೦% ಶೈಕ್ಷಣಿಕ ಕ್ಕೆ ಮೀಸಲಿದೆ ಎನ್ನುವುದನ್ನು ನಾವು ಗಮನ ಹರಿಸಬೇಕಾಗಿದೆ. ಅದನ್ನು ಸಮರ್ಪಕವಾಗಿ ಬಳಸುವದರಿಂದ ವಿದ್ಯಾರ್ಥಿಗಳ  ಶೈಕ್ಷಣಿಕ ಅಭಿವೃದ್ಧಿ ಇನ್ನೂ ಉತ್ತಮವಾಗಬಹುದು ಎಂದು  ತಿಳಿಯಪಡಿಸಿದರು. ತರಬೇತಿಯನ್ನು ಉದ್ಘಾಟಸಿ ಮಾತಾನಾಡಿದ  ಮುಖ್ಯೋಪಾಧ್ಯಯರಾದ ಶ್ರೀ ಈಶಪ್ಪ ತಳವಾರ ಅವರು ನಮ್ಮ ಶಾಲೆಯನ್ನು ಎಲ್ಲರೂ ಸೇರಿ ಒಗ್ಗೂಡಿ ನಮ್ಮ ಶಾಲೆಗೆ, ಮಕ್ಕಳಿಗೆ  ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವ ಕಡೇ ಗಮನ ನೀಡೋಣ. ಆಗ ನಮ್ಮ ಮಕ್ಕಳು ಪ್ರತಿ ಹಂತದಲ್ಲೂ ಶ್ರೇಷ್ಠರಾಗಿ ಸಮಾಜದಲ್ಲಿ ಮುನ್ನಡೆಯುತ್ತಾರೆ ಮತ್ತು ನಾಡನ್ನು ಮುನ್ನೆಡೆಸುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ತಿಪ್ಪಣ್ಣ ರಾಮದುರ್ಗ, ಶಿವಪ್ಪ ಇಲಾಳ, ಜಗದೀಶ ಬಾಸಿಂಗದ, ಸಂಗನಗೌಡ ಪಾಟೀಲ, ಶರಣಪ್ಪ, ಬಸಪ್ಪ , ರಮೇಶ, ಪ್ರಶಾಂತ ಕಟ್ಟಿ ಹಾಗೂ ಗುರುರಾಜ ಅವರು ಉಪಸ್ಥಿತರಿದ್ದರು.



No comments:

Post a Comment