Wednesday, February 17, 2021

ಇಂಗ್ಲೀಷ್ ಭಾಷಾ ವಿಷಯದ ಕಾರ್ಯಗಾರ

 ಇಂದು ದಿನಾಂಕ 17.02.2021 ರಂದು ಸರಕಾರಿ ಪ್ರೌಢಶಾಲೆ ಜಹಗೀರಗುಡದೂರನಲ್ಲಿ ಇಂಗ್ಲೀಷ್ ಭಾಷಾ ವಿಷಯದ ಕಾರ್ಯಗಾರ ನಡೆಯಿತು. ಕಾರ್ಯಕ್ರಮ ದ ಉದ್ಘಾಟನೆ ಯನ್ನು ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ವೆಂಕಟೇಶ ಕೊಂಕಲ್ ರವರು ಮಾತಾನಾಡಿದ ಕಡಿಮೆ ಅವಧಿಯಲ್ಲಿ ಉತ್ತಮ ಕ್ರಿಯಾ ಯೋಜನೆ ಹಾಕಿಕೊಂಡ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ನ್ನು ಸರಳೀಕರಣ ಗೊಳಿಸಬೇಕೆಂದು ಸಲಹೆ ನೀಡಿದರು. ಭಾಷೆಯನ್ನು ನಿತ್ಯ ತರಗತಿ ಕೋಣೆಯಲ್ಲದೇ ದಿನ ನಿತ್ಯದ ವ್ಯವಹಾರದಲ್ಲಿ ಯು ಇಂಗ್ಲೀಷ್ ನ್ನು ಬಳಸುವುದರಿಂದ ಸುಲಭವಾಗಿ ಕಲಿಯಬಹುದು. ಎಂದು ತಿಳಿಸಿದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಈಶಪ್ಪ ತಳವಾರ ರವರು ಮಾತಾನಾಡಿ ಸಂಪನ್ಮೂಲ ವ್ಯಕ್ತಿಗಳು ಹೇಳಿದಂತೆ ಬೋಧನೆಯಲ್ಲಿ ಸಾಧನ ಮತ್ತು ತಂತ್ರಾಂಶ ಬಳಸಿ ಫಲಿತಾಂಶದಲ್ಲಿ ಯಶಸ್ಸನ್ನು ಕಾಣಬಹುದು ಎಂದು ತಿಳಿಸಿದರು. ಸ್ಥಳೀಕರಾದ ಸೋಮಶೇಖರ ತುಪ್ಪದರವರು ತಮ್ಮ ತಂದೆತಾಯಿಗಳ ಸ್ಮರಣಾರ್ಥ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಕ್ಷಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಸಂಪನ್ಮೂಲ ವ್ಯಕ್ತಿ ಗಳಾಗಿ ಬಸವರಾಜ ಕಮತರ, ಬದರಿನಾಥ, ವೀರೇಶರವರು ಭಾಗವಹಿಸಿದ್ದರು. ಇಂಗ್ಲೀಷ್ ಪೋರಂ ಅಧ್ಯಕ್ಷರಾದ ಶ್ರೀ ಶಿವಪ್ಪ ಇಲಾಳರವರು ಪ್ರಸ್ತಾವಿಕವಾಗಿ ಮಾತನಾಡಿದರೆ ಸಂಗನಗೌಡ ಮಾಲಿಪಾಟೀಲ್ ರವರು ನಿರೂಪಿಸಿದರು ಜಗದೀಶ ಬಾಸಿಂಗದ ರವರು ವಂದಿಸಿದರು.

No comments:

Post a Comment